ಬೈಂದೂರು ನಮ್ಮೂರು :
ಪಡುಗಡಲ ದಡದಲ್ಲಿ ಬೆಳೆದು ನಿಂತಿಹ ಊರು
ತೆಂಗುಗಳ ಮಡಿಲಲ್ಲಿ ಹಸಿರು ಹಾಸಿದ ಸೂರು
ಕಡಲಿನಾರ್ಬಟ ಇಲ್ಲಿ ಸಪ್ತಸ್ವರವಂತೆ
ಎಲ್ಲ ಜಾತಿಯವರು ಇಲ್ಲಿ ಒಂದೇ ಕುಟುಂಬದಂತೆ
ಸೇನೆಶ್ವರ ,ಸೋಮೇಶ್ವರ ನಮ್ಮನು ಕಾಯುತಿಹನಂತೆ
ನಮ್ಮೆಲ್ಲ ಚಿಂತೆಯ ಹೋಗಲಾಡಿಸುವನಂತೆ
ಈಗರ್ಜಿಯಲಿದೆಯೊಂದು ಸ್ರಷ್ಟಿ ಕರ್ಥನ ಮನೆ
ಈ ತ್ಯಾಗಮಯಿಯ ಸಂದೇಶ ಪ್ರತಿದಿನವು ನೆನೆ
ಮುಂಜಾನೆ ಮುಸ್ಸಂಜೆ ದರ್ಗಾದ ಪ್ರಾರ್ಥನೆ
ಈ ಊರಲ್ಲಿ ಎಲ್ಲರೂ ಒಂದೇ ಎನ್ನೋ ಭಾವನೆ
ಯಾರೇ ಬಂದರು ಇಲ್ಲಿ ಸ್ವೀಕರಿಸುವ ಜನ
ಉಂಡು ಬಗೆದರೆ ಇಲ್ಲಿ ಬಿಡುವುದಿಲ್ಲ ನಿನ .
ಸ್ನೇಹಕ್ಕೆ ನೆಲೆಯುಂಟು ನಂಬಿಕೆಗೆ ಬೆಲೆಯುಂಟು
ಕೂಡಿ ಬಾಳಿದರಿಲ್ಲಿ ಬದುಕಿಗೂ ಅರ್ಥವುಂಟು
ಶುಕ್ರವಾರವಿಲ್ಲಿ ಜನಸಾಗರದ ಸಂತೆ
ದೂರದಿಂದ ಬಂದವರಿಗೆ ಬಸ್ಸಿಗಿಲ್ಲ ಚಿಂತೆ .
ಹಳೆ ಸರ್ಕಾರ ನೀಡಿದೆ ತಾಲೂಕು ಎಂಬ ಘೋಷಣೆ
ಈ ಸರ್ಕಾರವು ನೀಡಲಿ ಅದಕ್ಕೊಂದು ಮನ್ನಣೆ
ಬೇರೆ ಊರಿನ ಜನ ಹೇಳಿ ಹೋಗುವರಂತೆ
ಊರೆಂದರಿರಬೇಕು ಬೈಂದೂರಿನಂತೆ
-ಚರಣ್ ಬೈಂದೂರ್
ಪಡುಗಡಲ ದಡದಲ್ಲಿ ಬೆಳೆದು ನಿಂತಿಹ ಊರು
ತೆಂಗುಗಳ ಮಡಿಲಲ್ಲಿ ಹಸಿರು ಹಾಸಿದ ಸೂರು
ಕಡಲಿನಾರ್ಬಟ ಇಲ್ಲಿ ಸಪ್ತಸ್ವರವಂತೆ
ಎಲ್ಲ ಜಾತಿಯವರು ಇಲ್ಲಿ ಒಂದೇ ಕುಟುಂಬದಂತೆ
ಸೇನೆಶ್ವರ ,ಸೋಮೇಶ್ವರ ನಮ್ಮನು ಕಾಯುತಿಹನಂತೆ
ನಮ್ಮೆಲ್ಲ ಚಿಂತೆಯ ಹೋಗಲಾಡಿಸುವನಂತೆ
ಈಗರ್ಜಿಯಲಿದೆಯೊಂದು ಸ್ರಷ್ಟಿ ಕರ್ಥನ ಮನೆ
ಈ ತ್ಯಾಗಮಯಿಯ ಸಂದೇಶ ಪ್ರತಿದಿನವು ನೆನೆ
ಮುಂಜಾನೆ ಮುಸ್ಸಂಜೆ ದರ್ಗಾದ ಪ್ರಾರ್ಥನೆ
ಈ ಊರಲ್ಲಿ ಎಲ್ಲರೂ ಒಂದೇ ಎನ್ನೋ ಭಾವನೆ
ಯಾರೇ ಬಂದರು ಇಲ್ಲಿ ಸ್ವೀಕರಿಸುವ ಜನ
ಉಂಡು ಬಗೆದರೆ ಇಲ್ಲಿ ಬಿಡುವುದಿಲ್ಲ ನಿನ .
ಸ್ನೇಹಕ್ಕೆ ನೆಲೆಯುಂಟು ನಂಬಿಕೆಗೆ ಬೆಲೆಯುಂಟು
ಕೂಡಿ ಬಾಳಿದರಿಲ್ಲಿ ಬದುಕಿಗೂ ಅರ್ಥವುಂಟು
ಶುಕ್ರವಾರವಿಲ್ಲಿ ಜನಸಾಗರದ ಸಂತೆ
ದೂರದಿಂದ ಬಂದವರಿಗೆ ಬಸ್ಸಿಗಿಲ್ಲ ಚಿಂತೆ .
ಹಳೆ ಸರ್ಕಾರ ನೀಡಿದೆ ತಾಲೂಕು ಎಂಬ ಘೋಷಣೆ
ಈ ಸರ್ಕಾರವು ನೀಡಲಿ ಅದಕ್ಕೊಂದು ಮನ್ನಣೆ
ಬೇರೆ ಊರಿನ ಜನ ಹೇಳಿ ಹೋಗುವರಂತೆ
ಊರೆಂದರಿರಬೇಕು ಬೈಂದೂರಿನಂತೆ
-ಚರಣ್ ಬೈಂದೂರ್

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ