ಶನಿವಾರ, ನವೆಂಬರ್ 02, 2013

ಎತ್ತ ಸಾಗುತ್ತಿದೆ ರಾಜ್ಯ ರಾಜಕಾರಣದ ಹಾಗು ರಾಜಕಾರಿಣಿಗಳ ಮನಸ್ಥಿತಿ ????:

ನಾನೊಬ್ಬ ಜಾತ್ಯತೀತ ವಾದಿ ಆದರೆ ಬರೇ ಒಂದು ಕೋಮಿನ ಬಗ್ಗೆ ಮಾತನಾಡುವ ಅವಿವೇಕಿ ಅಲ್ಲ , ಪ್ರಜಪ್ರಬುತ್ವ ಇರುವ ಈ ದೇಶದಲ್ಲಿ ಎಲ್ಲರೂ ಒಂದೇ ಇಲ್ಲಿ ಧರ್ಮ , ಜಾತಿ ಎಂದು ಕಿತ್ತಾಡುವುದರಲ್ಲಿ ಅರ್ಥವಿಲ್ಲ , ಸ್ವತಂತ್ರ ಸಿಕ್ಕಿ ೬೬ ವರ್ಷ ಕಳೆದರು , ಮೀಸಲಾತಿ , ಅಲ್ಪ ಸಂಖ್ಯಾತರು , ಬಹು ಸಂಖ್ಯಾತರು ಎನ್ನುವ ಅರ್ಥವಿಲ್ಲದ ಕೆಲವು ಅಂಶ ಇಟ್ಕೊಂಡು ಕೆಲವು ಮೂರ್ಖ ರಾಜಕಾರಣಿ ಗಳು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ , ರಾಮಕೃಷ್ಣ ಹೆಗ್ಡೆ ಅಂಥಹ ದೀಮಂಥ ನಾಯಕನ ಗರಡಿಯಲ್ಲಿ ಬೆಳೆದ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕೆಲವು ಯೋಜೆನೆಗಳು ಅರ್ಥಹಿನವಾದದ್ದು , ನಮಗೆ ಅವಶ್ಯ ವಿರುವುದು ಶಾದಿ ಭಾಗ್ಯ ಅಲ್ಲ , ಬದಲಾಗಿ ಉದ್ಯೋಗ ಭಾಗ್ಯ . ಅಸಂಖ್ಯಾತ ಪದವಿದರರು ನಿರುದ್ಯೋಗಿಗಳಗಿರುವಾಗ ಅವರ ನಿರುದ್ಯೋಗದ ಸಮಸ್ಯೆ ಭಗೆ ಹರಿಸುವ ಬದಲು , ಶಾದಿ ಭಾಗ್ಯ , ಮಕ್ಕಳ ಭಾಗ್ಯ ಎನ್ನುವ ಯೋಜೆನೆಗಳು ಅಪ್ರಸ್ತುತ . ಯಾರು ಮದುವೇ ಮಾಡಿ ಅಂತ ಜನಪ್ರಥಿನಿದಿಗಳನ್ನು ಆಯ್ಕೆ ಮಾಡೋದಿಲ್ಲ ಬದಲಾಗಿ , ಮೂಲಭೂತ ಸೌಕರ್ಯ , ಉದ್ಯೋಗ ಒದಗಿಸಲಿ ಎನ್ನು ವ ಮಹದಾಸೆ ಯೊಂದಿಗೆ ಓರ್ವ ಜನಪ್ರಥಿನಿದಿಯನ್ನು ಆರಿಸುತ್ತಾರೆ . ನಾನು ಸಹ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗ ಈತ ಓಳ್ಳೆಯ ಆಡಳಿತ ಗಾರನಾಗಬಹುದು ಎಂದು ತಿಳಿದಿದ್ದೆ ಆದರೆ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಇವರು ಕೂಡ ವೋಟು ಬ್ಯಾಂಕ್ ರಾಜಕಾರಣಕ್ಕೆ ಮೊರೆ ಹೋದಂತಿದೆ , ಜನರಿಗೆ ಅವಶ್ಯವಿರುವುದು ಶಾದಿ ಭಾಗ್ಯದಂಥಹ ಯೋಜೆನೆಗಳಲ್ಲ ಒಂದು ವೇಳೆ ಬಡ ಜನರ ಮದುವೆಗೆ ಸಹಾಯ ಮಾಡಬೇಕು ಅನ್ನುವ ಒಳ್ಳೆ ಯಾ ಅಭಿಲಾಷೆ ಅವರ ಮನಸ್ಸಿನಲ್ಲಿದ್ದರೆ ಆ ಯೋಜೆನೆಯನ್ನು ಎಲ್ಲರಿಗೂ ಅನ್ವಯಿಸುವಂತೆ ಜಾರಿಗೆ ತರಬೇಕು ಬದಲಾಗಿ ಒಂದು ಕೋಮಿನವರನ್ನು ಒಲಿಸಿ ವೋಟು ಬ್ಯಾಂಕ್ ರಾಜಕಾರಣ ಮಾಡುವುದಲ್ಲ . ಬಡವರು ಎಲ್ಲ ಧರ್ಮ ದಲ್ಲೂ ಇದ್ದಾರೆ ವಿನಾಕಾರಣ ಅಲ್ಪ ಸಂಖ್ಯಾತರು , ಬಹು ಸಂಖ್ಯಾತರು ಎನ್ನುವ ವಿಷದ ಬೀಜವನ್ನು ಬಿತ್ತಿ ಮುಗ್ದ ಮನಸ್ಸಿನ್ನ ನಾಗರಿಕರ ಮನಸ್ತಿತಿ ಕೆಡಿಸುವ ಇಂಥಹ ಜನ ನಾಯಕನಿಗೆ ಏನೆನ್ನ ಬೇಕು . ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ , ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ , ಕನ್ನಡಿಗರಿಗೆ ಮಾತ್ರ ರಾಜ್ಯ ಸರ್ಕಾರೀ ಕೆಲಸ ಎನ್ನುವ ಆದೇಶ ಹೊರಡಿಸಿ , ಕನ್ನಡಿಗರಿಗೆ ಖಾಸಗಿ ಕಂಪನಿ ಗಳಲ್ಲಿ ೭೫ % ಉದ್ಯೋಗ ನಿದಲೇ ಬೇಕೆಂಬ ಕಟ್ಟಾಜ್ಞೆ ಹೊರಡಿಸಿ , ಹಳ್ಳಿ ಹಳ್ಳಿಗು ಕುಡಿಯಿವ ನೀರು ,ವಿದ್ಯುತ್ ಒದಗಿಸಿ , ಬ್ರಷ್ಟಾಚಾರ ನಿರ್ಮೂಲನೆ , ಬಡತನ ನಿರ್ಮೂಲನೆ , ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಇಂಥಹ ಯೋಜನಗಳನ್ನು ಅನುಷ್ಟಾನಕ್ಕೆ ತಂದರೆ ಆ ಯೋಜನೆಗಳು ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿಯಿತ್ತದೆ ಅದನ್ನು ಬಿಟ್ಟು ಶಾದಿ ಭಾಗ್ಯ ದಂಥ ಯೋಜೆನೆಗಳು ಬರೇ ಮದುವೆಯಾಗಿ ವಿಚ್ಚೇದನ ವಾಗುವ ವರೆಗೆ ಮಾತ್ರ ಅಂಥಹ ಯೋಜನೆಗಳು ಯಾರ ಮನಸ್ಸಿನಲ್ಲೂ ದೀರ್ಘ ಕಾಲದ ವರೆಗೂ ಉಳಿಯಲಾಗದು. ತಪ್ಪನ್ನು ತಿದ್ದಿ ನಡೆದರೆ ಮತ್ತೊಮ್ಮೆ ಅದಿಕಾರ ಸಿಕ್ಕರೂ ಸಿಗಬಹುದು ಇಲ್ಲದಿದ್ದಲ್ಲಿ ಮಾಜಿ ಎನ್ನುವ ಪಟ್ಟವೇ ಗಟ್ಟಿ ಏನಂತಿರ ಗೆಳೆಯರೇ ?????

ಗುರುವಾರ, ಅಕ್ಟೋಬರ್ 31, 2013

ಎಂದೂ ಮರೆಯದ ದೀಪಾವಳಿ : ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂಬಂತೆ ಇನ್ನೆರಡು ದಿನದಲ್ಲಿ ಮತ್ತೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಬ್ರಮ . ದೀಪಾವಳಿಯ ಹೆಸರು ಕೇಳಿದೊಡನೆ ಬಾಲ್ಯದ ದೀಪಾವಳಿಯ ದಿನಗಳು ಕಣ್ಣ ಮುಂದೆ ಬಂದು ನಿಂತ ಹಾಗಿರುತ್ತದೆ . ಅದುನಿಕಥೆಯ ಅಬ್ಬರಕ್ಕೆ ಸಿಕ್ಕಿ ಧಾರ್ಮಿಕ ಆಚರಣೆಗಳು ಈಗ ಅಷ್ಟಾಗಿ ಆಚರಣೆಯಲ್ಲಿಲ್ಲದಿದ್ದರು ಕೆಲವು ವರ್ಷಗಳ ಹಿಂದಂತು ನನ್ನೂರು ಬೈಂದೂರಿನಲ್ಲಿ ಬೆಳಕಿನ ಹಬ್ಬದ ಗಮ್ಮತ್ತು ಜೋರಾಗೆ ಇರುತಿತ್ತು . ದೀಪಾವಳಿ ಬಂತೆಂದರೆ ದೂರದ ಊರುಗಳಲ್ಲಿ ನೆಲೆಸಿರುವ ಸಂಬಂದಿಗಳೆಲ್ಲರು ಊರಿಗೆ ಹಾಜರ್ ದೀಪಾವಳಿ ಯಿಂದ ಶುರುವಾಗಿ ತುಳಸಿ ಹಬ್ಬದ ವರೆಗೂ ಪ್ರತಿದಿನ ಮನೆಯಲ್ಲಿ ಹಬ್ಬದ ವಾತಾವರಣವೇ .ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಪಟಾಕಿ ಸಿಡಿಸಿ, ಮನೆ ಸುತ್ತಲು ಮೇಣದ ಬತ್ತಿ ,ದೀಪ ಬೆಳಗಿಸಿ ಹಬ್ಬದ ಸಂಬ್ರಮದಲ್ಲಿ ಭಾಗಿಯಾಗುತ್ತಿದ್ದರು. ದೀಪಾವಳಿಯ ದಿನ ಬೆಳಿಗ್ಗೆ ೫ ಗಂಟೆಗೆ ಎದ್ದು ಎಣ್ಣೆ ಸ್ನಾನ(ಈಗ ಬಿಡಿ ಎಣ್ಣೆ ಸ್ನಾನ ಮಾಡುವವರೇ ಕಡಿಮೆ ಹೊಟ್ಟೆಗೆ ಮಾತ್ರ ಎಣ್ಣೆ ಸ್ನಾನ ಮಾಡ್ಸ್ತಾರೆ ) ಮಾಡಿ ಪಟಾಕಿ ಹೊಡೆಯಲು ಅರಂಬಿಸಿದರೆ ಸಮಯ ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ , ದೀಪಾವಳಿಗೆಂದೆ ವಿಶೇಷ ವಾಗಿ ತಯಾರಿಸುತ್ತಿದ್ದ ಸಿಹಿ ಕಡಬು ಮತ್ತು ಚಪ್ಪೆ ಕಡಬು ,ತುಳಸಿ ಹಬ್ಬದ ನೆಲ್ಲಿ ಕಾಯಿ ಹುಣಸೆ ಹಣ್ಣು ಇನ್ನು ಬಾಲ್ಯದ ಆ ಹಬ್ಬದ ದಿನಗಳು ನನ್ನ ಮನದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ , ದೀಪಾವಳಿಯ ಸಮಯದಲ್ಲಿ ವಾರಗಟ್ಟಲೆ ಸದ್ದು ಮಾಡುವ ಗರ್ನಲ್ ,ಆಟಂ ಬಾಂಬ್ , ಲಕ್ಷ್ಮಿ ಪಟಾಕಿ ,ಸರ ಪಟಾಕಿ ಶಬ್ದಕ್ಕೆ ಮನೆಯಲ್ಲಿ ಸಾಕಿದ ನಾಯಿ ವಾರಗಟ್ಟಲೆ ಓಡಿಹೋಗಿದ್ದು ಉಂಟು . ಬಾಲ್ಯದಲ್ಲಿ ಗೆಳೆಯರೊಡನೆ ,ಸೋದರ ಸಂಬಂದಿಗಲೊಡನೆ ಪಟಾಕಿ ಸಿಡಿಸಿ ಹಬ್ಬ ಆಚರಿಸಿದ ಆ ದಿನಗಳನ್ನು ಮರೆಯುವುದುಂಟೆ, ನನ್ನಂತೆ ನಿಮಗೂ ಕೂಡ ಈ ಹಬ್ಬದ ಹೆಸರು ಕೇಳಿದೊಡನೆ ನಿಮ್ಮ ಬಾಲ್ಯದ ದಿನಗಳು ನೆನೆಪಗಬಹುದು ಅಲ್ವಾ ???? ಏನೆ ಹೇಳಿ ಹಿಂದಿನ ವರ್ಷಗಳ ದೀಪಾವಳಿಯ ಗಮ್ಮತ್ತು ಈಗಿಲ್ಲ ಬಿಡಿ ,ಇನ್ನು ಕೆಲವು ವರ್ಷ ಹೋದರೆ ದೀಪಾವಳಿ ಬರೇ ಸರ್ಕಾರೀ ರಜೆಗಷ್ಟೇ ಸಿಮಿತವಾದರೂ ಆಗಬಹುದು .


ಬುಧವಾರ, ಅಕ್ಟೋಬರ್ 16, 2013


ಬದಲಾದ ಬೈಂದೂರು :


ಎಲ್ಲ ಊರುಗಳ ಹಾಗೆ ನನ್ನೂರು ಬೈಂದೂರು ಸಹ ಬದಲಾಗಿದೆ , ಹುಡುಗರೆಲ್ಲ ಖಾಲಿಯಾಗಿ, ಹುಡುಗಿಯರೆಲ್ಲ ಮದುವೆಯಾಗಿ, ಯುವ ಪೀಳಿಗೆ ಶಾಲಾ ಕಾಲೇಜಿನ ಹಾದಿ ಸವೆಸುತ್ತಾ ಊರುಬಿಡುವ ಯೋಚನೆಯಲ್ಲಿದ್ದಾರೆ . ಇನ್ನು ಕೆಲವರು ಊರು ಬಿಟ್ಟು ಬರಲಾಗದ ಸಂಕಟದಲ್ಲಿ ಕಾಲಹರಣ ಮಾಡುತ್ತ ಕುಳಿತಿದ್ದಾರೆ .
ಬೇಲಿ ಬದಿಯಲ್ಲಿ ಮೇವು ಹೆಕ್ಕುವ ಕೋಳಿಗಳನ್ನು , ಗದ್ದೆ ಬದಿಯಲ್ಲಿ ಗೋಲಿ ,ಚೀನಿ ದಾಂಡು ಆಡುವ ಹುಡುಗರನ್ನು ,ಮನೆಯಂಗಳದಲ್ಲಿ ಕುಂಟೆ ಬಿಲ್ಲೆ ಆಡುವ ಹುಡಿಗಿಯರನ್ನು ನಾವೀಗ ಕಾಣಲಾರೆವು, ಗದ್ದೆ ಅಂಚಿನಲ್ಲಿ ರಗೋಲಿ ಆಡುತ್ತಿದ್ದ ಹುಡುಗರೆಲ್ಲ ಕಂಪ್ಯೂಟರ್ ಮುಂದೆ ಮೌಸ್ ಹಿಡಿದು ಕುಳಿತಿದ್ದಾರೆ . ಸಾರ್ವಜನಿಕ ಗಂಥಾಲಯವನ್ನು ಕೇಳುವವರೇ ಗತಿಯಿಲ್ಲ . ನಾ ಕಲಿತ ಕನ್ನಡ ಶಾಲೆಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು , ಬಯಲು ಮೈದಾನಗಳಲ್ಲಿ ಆಟೋಟಗಳಿಲ್ಲ. ಬೆಲ್ ಬರ್ಕ ,ಚಪ್ಪರ್ಕ , ಹೆಕ್ಕ ತಿಂಬನೆ , ಎನ್ನುವ ಶಬ್ದಗಳನ್ನು ಈಗ ಹೆಚ್ಚಾಗಿ ಯಾರು ಬಳಸುತ್ತಿಲ್ಲ . ಹೊಸತಾಗಿ ಯಾರೂ ಹೆಂಚಿನ ಮನೆಗಳನ್ನ ಕಟ್ಟುತ್ತಿಲ್ಲ. ಗದ್ದೆಗಳೆಲ್ಲ ಸೈಟುಗಳಾಗಿ, ಮನೆಗಳಾಗಿ, ಮಳಿಗೆಗಳಾಗಿ ಬದಲಾಗಿವೆ , ಇಷ್ಟಾದರೂ ಮೂಲ ಬೈಂದೂರಿಗರಿಗೆ ಊರಲ್ಲೇ ಇದ್ದುಕೊಂಡು ಮಾಡಲು ಸರಿಯಾದ ಕೆಲಸ ಸಿಗುತ್ತಿಲ್ಲ . ದೇವರ ದಯೆಯಿಂದ ಯಾವುದೊ ಒಂದು ಕೆಲಸ ಸಿಕ್ಕಿ ಅಲ್ಲೇ ಕೆಲಸ ಮಾಡಿದರೆ ಅವರಿಗೆ ಅಷ್ಟೇನೂ ಮನ್ನಣೆಯಿಲ್ಲ. ಇಷ್ಟಾದರೂ ಅವರಿವರ ವಿಷಯ ಮಾತನಾಡುತ್ತ , ಇನ್ನೊಬ್ಬರನ್ನು ಮೂದಲಿಸುತ್ತ ( ನಮ್ಮ ಭಾಷೆ ಯಲ್ಲಿ ಹಿಲಾಲ್ ಇಡುತ್ತ ) ಕಾಲ ಕಳೆಯುವ ಜನರ ಸಂಖ್ಯೆಯೇನು ಕಡಿಮೆಯಿಲ್ಲ .
ಈಗಿನ ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ನಡೆದು ಹೋಗುವುದು ತುಂಬ ಅಪರೂಪ (ಪ್ರತಿದಿನ ಸರಿಯಾಗಿ ಕಾಲೇಜಿಗೆ ಹೋಗುವುದು ಇನ್ನು ಅಪರೂಪ ಬಿಡಿ ). ೧ ಬಂಗಡೆ ಮೀನಿಗೆ ೫೦ ರೊಪಾಯಿ ಆಗಿದೆಯಂತೆ , ಶುಕ್ರವಾರದ ಸಂತೆಗೂ ಜನ ಸಾಗರವಿಲ್ಲ. ಅದುನಿಕಥೆಯ ಅಬ್ಬರಕ್ಕೆ ನನ್ನೂರು ತುಂಬ ಬದಲಾವಣೆ ಕಂಡರೂ ಸಹ ಅದುನಿಕಥೆಯ ಗಾಳಿ ಓ ಸಿ ಅಂಗಡಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಅಭಿವ್ರದ್ದಿಯ ವಿಷಯಕ್ಕೆ ಬಂದರೆ ಮಾತ್ರ ಬದಲಾವಣೆ ಎನ್ನುವುದು ಇಲ್ಲಿ ಎಷ್ಟರ ಮಟ್ಟಿಗೆ ನಡೆದಿದೆ ಎನ್ನುವ ನಗ್ನ ಸತ್ಯವನ್ನು ನಾ ಹೇಳಲಾರೆ ಯಾಕೆಂದರೆ ತಾಲೂಕು ಗೋಷಣೆ ಎಂಬ ಸುದ್ದಿಯನ್ನು ಸೂಮಾರು ೨೦ ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ ಆದರು ಸಹ ಇನ್ನು ಅಧಿಕ್ರತ ಗೋಷಣೆ ಆಗಿಲ್ಲ .
ಅದೇನೇ ಇರಲಿ ಐದತ್ತು ವರ್ಷ ಬಿಟ್ಟು ಊರಿಗೆ ಹೋದರೆ ಪರ ಊರಿಗೆ ಹೋದ ಅನುಭವ ಆದರು ಆಗಬಹುದು . ನಿವೇನಂತಿರಾ ಗೆಳೆಯರೇ ?????

ಗುರುವಾರ, ಅಕ್ಟೋಬರ್ 10, 2013


ಬುಧವಾರ, ಸೆಪ್ಟೆಂಬರ್ 25, 2013

 ಆ ದಿನಗಳು :

ಸುಮಾರು ಎಂಟತ್ತು ವರ್ಷಗಳ ಹಿಂದೆ ಬೈಂದೂರಿನಲ್ಲಿ ರಥೋತ್ಸವ ಎಂದರೆ ಬಾರಿ ಜನ ಸಾಗರವೇ ಸೇರುತಿತ್ತು. ದೂರದ ಊರಲ್ಲಿರುವ ಬೈಂದೂರಿಗರು ತೇರಿಗೆಂದು ರಜಾ ಪಡೆದು ಊರಿಗೆ ಬರ್ತಿದ್ದ ಕಾಲವದು .
ನಾಡ ಹಬ್ಬ ದಸರಾ ಮೈಸೂರಿನಲ್ಲಿ ಹೇಗೆ ವಿಜ್ರಂಬಣೆಯಿಂದ ನಡೆಯುತಿತ್ತು ಬೈಂದೂರಿನಲ್ಲಿ ರಥೋತ್ಸವ ಅಷ್ಟೇ ವಿಜ್ರಂಬಣೆಯಿಂದ ನಡೆಯುತಿತ್ತು. ಬೈಪಾಸ್ ನಿಂದ ಹಿಡಿದು ಮಾರ್ಕೆಟ್ ನ ಇಕ್ಕೆಲಗಳಲ್ಲಿ ಸಾಲು ಸಾಲು ಅಂಗಡಿಗಳು, ಐಸ್ ಕ್ರೀಂ ವ್ಯಾನ್ ಗಳು . ಸೇನೆಶ್ವರ ದೇವಳದಲ್ಲಿ ದರ್ಶನಕ್ಕೆಂದೇ ಸರದಿ ಸಾಲಲ್ಲಿ ನಿಲ್ಲುತ್ತಿದ್ದ ಭಕ್ತಾದಿಗಳು.
ಮಾರ್ಕೆಟ್ ನ ಒಳಬಾಗದಲ್ಲಿ ಸಾಲು ಸಾಲು ಆಟಿಕೆ, ಸಿಹಿತಿಂಡಿ ,ಬಳೆ ಅಂಗಡಿಗಳು. ಎಡಬಿಡದೆ ತಿರುಗುತಿದ್ದ ತೊಟ್ಟಿಲು ,ಆ ತೊಟ್ಟಿಲೇರಲು ಬೆಳಿಗ್ಗಿನಿಂದಲೇ ಕಾದು ನಿಲ್ಲುದ್ದಿದ್ದ ಪುಟಾಣಿ ಮಕ್ಕಳು ,ಯುವಕರು . ಮರದ ಕುದುರೆ,ಬೈಕ್ ಮುಂತಾದ ಅಕ್ರತಿಯುಳ್ಳ ಬೊಂಬೆಯಾ ಮೇಲೆ ಮಕ್ಕಳನ್ನು ಕೂರಿಸಿ ವ್ರತ್ಥಾಕಾರದಲ್ಲಿ ತಿರುಗುತಿದ್ದ ಆಟಿಕೆ. ಶ್ರೀದರ್ ಬಟ್ಟರ ಮನೆಯ ಸಮೀಪ ಗಗನ ಚುಂಬಿಸಿ ಭೂಮಿಗೆ ಬರುವಂತಿದ್ದ ವಿದ್ಯುತ್ ತೊಟ್ಟಿಲು , ಮಿನಿ ಸರ್ಕಸ್ ,ಗರ ಗರ ಮಂಡಲ , ಸಂಜೆಯ ವೇಳೆ ಶಾರದಾ ವೇದಿಕೆಯಲ್ಲಿ ಲಾವಣ್ಯದ ನಾಟಕ , ರಥ ಎಳೆಯುವ ಸಮಯದಲ್ಲಿ ರಥದ ಎದುರು ಕುಣಿಯುತ್ತಿದ್ದ ತಟ್ಟಿರಾಯ .ರಥದ ಮೇಲಿರುವ ಕಲಶಕ್ಕೆ ಬಾಳೆಹಣ್ಣು ಎಸೆಯದಿದ್ದರು ಒಳಗಡೆ ಕುಳಿತ ಅರ್ಚಕರಿಗೆ ಬಾಳೆಹಣ್ಣು ಎಸೆಯುತಿದ್ದ ಯುವಕರ ಗುಂಪು . ಪ್ರತಿ ವರ್ಷವೂ ತಪ್ಪದೆ ಬರುತ್ತಿದ್ದ ಮಂಟಪ್, ಯೋಯೋ , ಕಿಣಿ ಐಸ್ ಕ್ರೀಂ ಗಳು . ಸಾಲು ಸಾಲು ಕಬ್ಬಿನ ಹಾಲಿನ ಅಂಗಡಿ . ಆ ಒಂದು ದಿನ ಬೈಂದೂರಿನ ಪಾಲಿಗೆ ನಿಜಕ್ಕೂ ಅವಿಸ್ಮರಣಿಯ ದಿನಾವಗಿರುತಿತ್ತು .

ಆದರೆ ಇತ್ತಿಚಿನ ವರ್ಷಗಳಲ್ಲಿ ರಥೋತ್ಸವದ ರಂಗು ಕಡಿಮೆಯಾದಂತೆ ಗೋಚರಿಸುತ್ತಿದೆ.ಸಾಂಪ್ರದಾಯಕ ಆಟದಂತಿದ್ದ ತೊಟ್ಟಿಲು ಮರದ ಕುದುರೆಗಳು ಕೆಲವು ಕಾರಣಗಳಿಂದಾಗಿ ಈಗ ಬೈಂದೂರು ರತ್ಹೊತ್ಸವದಲ್ಲಿ ಕಾಣಸಿಗುವುದಿಲ್ಲ್ಲ.
ರೋಡಿಗೊಂದು ಫ್ಯಾನ್ಸಿ ಸ್ಟೋರ್ ಶುರುವಾಗಿ ಜಾತ್ರೆಯ ಬಳೆಗಳು ,ಆಟಿಕೆಗಳನ್ನುಕೆಳುವವರಿಲ್ಲದಂತಾಗಿದೆ.
ಪೆಪ್ಸಿ ಕೋಲಾ ಗಳಿಗೆ ಮಾರುಹೋಗಿರುವ ಯುವಪೀಳಿಗೆಗೆ ಕಬ್ಬಿನಹಾಲು ಅಷ್ಟಕ್ಕಷ್ಟೇ .
ದೂರದ ಊರಿನಲ್ಲಿರುವವರು ಅವರವರ ಕೆಲಸದ ನಡುವೆ ಊರಿನ ಜಾತ್ರೆಯನ್ನೇ ಮರೆತಂತಿದೆ. ವರ್ಷದಿಂದ ವರ್ಷಕ್ಕೆ ರತ್ಹೊಥ್ಸವಕ್ಕೆ ಬರುತಿದ್ದ ಜನಸಾಗರ ಕ್ಷಿಣಿಸುತ್ತಾ ಸಾಗಿದೆ. ಬಾಲ್ಯದಲ್ಲಿ ಕಂಡ ಆ ಜಾತ್ರೆಯ ಸೊಬಗು ಮತ್ತೆ ನಮಗೆ ಕಾಣ ಸಿಗಲಿ ಎಂಬ ಆಶಯದೊಂದಿಗೆ......
ಇಂತಿ ನಿಮ್ಮವ
ಚರಣ್ ಬೈಂದೂರ್

ಶುಕ್ರವಾರ, ಸೆಪ್ಟೆಂಬರ್ 20, 2013

ಹೋರಾಟ

ಬ್ರಿಟಿಷರು ನಮ್ಮ ದೇಶ ಬಿಟ್ಟು ೬೫ ವರ್ಷ ಕಳೆದರು ಸಹ ಇನ್ನು ಹಲವಾರು ಭಾರತೀಯರು ಬ್ರಿಟಿಷ್ ಮನೋಸ್ಥಿತಿಯನ್ನು ಬಿಟ್ಟಿಲ್ಲ . ಗೆದ್ದಲು ಕಟ್ಟಿದ ಹುತ್ತದಲ್ಲಿ ಹಾವು ವಾಸ ಮಾಡಿದಂತೆ ಯಾರೋ ಕಟ್ಟಿದ್ದ ಸಾಮ್ರಾಜ್ಯದಲ್ಲಿ ದಳಪಥಿಗಳಾಗಿ ಇನ್ಯಾರೋ ಆಳ್ವಿಕೆ ನಡೆಸುತ್ತ ಇದ್ದಾರೆ .ಅಂದು ಬ್ರಿಟಿಷರನ್ನು ಓಡಿಸಲು ಭಾರತ ಬಿಟ್ಟು ತೊಲಗಿ ಎನ್ನುವ ಚಳುವಳಿ ನಡೆದಿತ್ತು ಇಂದು ನಮ್ಮಲ್ಲಿನ ಕೆಲವು ಬ್ರಿಟಿಷರನ್ನು (ಬ್ರಿಟಿಷ್ ಮೆಂಟಲಿಟಿ ಇರುವವರನ್ನು ) ಸರಿ ಮಾಡಲು ಇನ್ನೊಂದು ಹೋರಾಟದ ಅಗತ್ಯವಿರುವಂತೆ ಗೋಚರಿಸುತ್ತಿದೆ ಏನಂತಿರ ಗೆಳೆಯರೇ ????

ಶನಿವಾರ, ಸೆಪ್ಟೆಂಬರ್ 14, 2013

ಬಿಕೋ ಎನ್ನುತ್ತಿದೆ ಬೈಂದೂರು ಗಾಂಧಿ ಮೈಧಾನ:
ಅದೊಂದು ಕಾಲವಿತ್ತು ಸಂಜೆ ಆಯಿತೆಂದರೆ ಗಾಂಧಿ ಮೈಧಾನದಲ್ಲಿ (ಬಂಗಲೆ ಜಡ್ದ್ ) ಕ್ರೀಡಾ ಪ್ರಿಯರ ದಂಡೆ ಇರುತಿತ್ತು .ಮೈಧಾನದ ಉತ್ತರ ದಿಕ್ಕಿನಲ್ಲಿ ವಿಕ್ರಮ್ ಕ್ಲಬ್ ನವರ ಕ್ರಿಕೆಟ್ ತಾಲೀಮು ,ದಕ್ಷಿಣ ತುದಿಯಲ್ಲಿ ಬ್ಲೂ ಸ್ಟಾರ್ ಕ್ರಿಕೆಟ್ ಕ್ಲಬ್ ನವರ ಕ್ರಿಕೆಟ್ ತಾಲೀಮು ,ಪಶ್ಚಿಮ ಭಾಗದಲ್ಲಿ ಪ್ರಥ್ವಿ ಕ್ರೀಡಾ ಸಂಘ ದವರ ವಾಲಿಬಾಲ್ ತಾಲೀಮು, ಸುತ್ತಲು ಇರುವ ಮರವನ್ನೇ ವಿಕೆಟ್ ಆಗಿಸಿಕೊಂಡು ಕ್ರಿಕೆಟ್ ಆಡುತ್ತಿದ್ದ ಹಾಸ್ಟೆಲ್ ಹುಡುಗರು ,ಇವರುಗಳ ನಡುವೆ ಹೊಸತಾಗಿ ಸೈಕಲ್ ಕಲಿಯುವ ಹುಡುಗರ ದಂಡು. ಸಂಜೆ ೪ ರಿಂದ ೭ ರ ತನಕ ಅಲ್ಲಿ ಕ್ರೀಡಾ ಪ್ರಿಯರ ದಂಡೆ ಇರುತಿತ್ತು .ವರ್ಷಕ್ಕೆ ಕಮ್ಮಿ ಎಂದರು ೩ ರಿಂದ ೪ ಕ್ರಿಕೆಟ್ ಟೂರ್ನಮೆಂಟ್ ,ಕಬಡ್ಡಿ ವಾಲಿಬಾಲ್ ಟೂರ್ನಮೆಂಟ್,ಶಾಲಾ ಕಾಲೇಜುಗಳ ಕ್ರೀಡೋತ್ಸವ ನಿಜವಾಗಲು ಅದು ಗಾಂಧಿ ಮೈಧಾನದ ವೈಭವದ ದಿನಗಳು.
ಕಾಲ ಬದಲಾದಂತೆ ಕೆಲವು ವರ್ಷಗಳಿಂದ ಗಾಂಧಿ ಮೈಧಾನ ಬಿಕೋ ಎನ್ನುತ್ತಿದೆ , ಪ್ರಥ್ವಿ ಕ್ರೀಡಾ ಸಂಘ ದವರ ವಾಲಿಬಾಲ್ ತಾಲೀಮು ಬಿಟ್ಟರೆ ಉಳಿದಂತೆ ಮೈಧಾನ ಖಾಲಿ ಖಾಲಿ   . ಬದಲಾದ ಕಾಲದಲ್ಲಿ ಯುವಕರಲ್ಲಿ ಕ್ರೀಡಾ ಆಸಕ್ತಿ ನಶಿಸಿ ಹೋದಂತೆ ಕಾಣುತ್ತಿದೆ . ಮೊದಲೆಲ್ಲ ಸಂಜೆ ಹೊರಗೆ ಹೋದ ಮಗ ಮನೆಗೆ ಬರುವುದು ತಡವಾದರೆ ತಂದೆ ತಾಯಿಗಳು ನುಕ್ಕಿ ಕೋಲ್ ಹಿಡ್ಕಂಡ್ ಮೈಧಾನಕ್ಕೆ ಬರುವುದು ಸರ್ವೇ ಸಾಮಾನ್ಯವಾಗಿತ್ತು ,ಇಂದು ಹಾಗಲ್ಲ ಮಕ್ಕಳನ್ನು ಹುಡಿಕಂಡ್ ಅಪ್ಪ ಅಮ್ಮ ಬೈಂದೂರಿನ ಸುತ್ತ ಮುತ್ತಲಿನ ಸೈಬರ್ ಕೆಫೆ ಅಲೆಯುವಂತಾಗಿದೆ.
ಏನೇ ಹೇಳಿ ಗಾಂಧಿ ಮೈಧಾನದಲ್ಲಿ ಆಡುತ್ತ ನಮ್ಮ ಸುಂದರ ಬಾಲ್ಯದ ಕ್ಷಣಗಳನ್ನು ಕಳೆದ ನಾವೇ ಧನ್ಯರಲ್ಲವೇ ಗೆಳೆಯರೇ  ,
ಗಾಂಧಿ ಮೈಧಾನ ಆ ವೈಭವದ ದಿನಗಳನ್ನು ಮತ್ತೆ ಕಾಣಲಿ ಎಂದು ಆಶಿಸುತ್ತಾ 
ಇಂತಿ ನಿಮ್ಮವ
ಚರಣ್ ಬೈಂದೂರ್